Wednesday, 20 January 2016

ಹೈದರಾಬಾದು ವಿಶ್ವವಿದ್ಯಾಲಯದ ದರ್ಘಟನೆ

                     ಹೈದರಾಬಾದು ವಿಶ್ವವಿದ್ಯಾಲಯದ ದರ್ಘಟನೆ


                   ಎರಡು ದಿನಗಳ ಹಿಂದೆ ಹೈದರಾಬಾದು ವಿಶ್ವವಿದ್ಯಾಲಯದ ಆವರಣದಲ್ಲಿ ದುರ್ಘಟನೆಯೊಂದು ನಡೆದು ಹೋಯಿತು. ಒಬ್ಬ ಪಿ ಎಚ್ಡಿ ವಿದ್ಯಾರ್ಥಿಯ ಆತ್ಮಹತ್ಯೆ ಎಂದರೆ ತುಂಬ ದುರದೃಷ್ಟಕರವೇ ಸರಿ. ಅವನ ಆತ್ಮಕ್ಕೆ ದೇವರು ಶಾಂತಿಯನ್ನು ನೀಡಲಿ. ಇಂತಹ ಸೂಕ್ಷ್ಮ ಘಟನೆಯ್ನು ರಾಜಕೀಯಕ್ಕೆ ಬಳಸಿಕಳ್ಳುತ್ತಿರುವುದು ಅವಮಾನಕರ. ಅದೂ ಜನಮಾನಸವನ್ನು ಉದ್ವೇಗಗೊಳ್ಳುವಂತೆ ಪ್ರಚೋದಿಸುವ ಮೂಲಕ.  ಹೀಗಾಗದಿರಲಿ. ರಾಕೀಯಸ್ಥರು ರಾಷ್ಟ್ರದ ರಾಜ್ಯದ ಅಭಿವೃದ್ಧಿಕನಸುಗಳ ಬಗ್ಗೆ ಕ್ರಿಯಾಶೀಲರಾಗಲಿ. ವಿಶ್ವವಿದ್ಯಾಲಯದ ಸಮಾಲೋಚನ ವಿಭಾಗ ಸಮಸ್ಯೆಗಲನ್ನು ಗುರುತಿಸಿ ಸೂಕ್ತ ಸಲಹೆಗಳನ್ನು ಕೊಡುತ್ತಾ ಇಂತಹ ಘಟನೆಗಳು ನಡೆಯದಂತೆ ತಡೆಯಬೇಕು. ಸಮಾಲೋಚನ ವಿಭಾಗಿಲ್ಲದಿದ್ದರೆ ಅಂತಹ ವಿಭಾಗವೊಂದನ್ನು ತೆರೆಯುವುದು ತತ್ಕ್ಷಣದ ಅಗತ್ಯ.

Tuesday, 15 December 2015

ಪ್ರೀತಿಯ ಎಡ್ವರ್ಡ್ ನೊರೋನ್ಹಾ



                                                    ಪ್ರೀತಿಯ ಎಡ್ವರ್ಡ್ ನೊರೋನ್ಹಾ

                             ಏಕೋ ಈ ದಿನ ನೊರೋನ್ಹಾರ ನೆನಪು ತುಂಬ ಬಂತು. ಮಂಗಳೂರಿನ ಮಂಗಳಗಂಗೋತ್ರಿಯಲ್ಲಿ ನಾನು ಎಮ್ ಎ ಮಾಡುತ್ತಿದ್ದಾಗ ಎಡ್ವರ್ಡ್ ನೊರೋನ್ಹಾ ನನ್ನ ಸಹಪಾಠಿ. ನನಗಿಂತ ಆರು ವರ್ಷ ಹಿರಿಯರಾದರೂ ಉತ್ತಮ ಗೆಳೆಯ. ನಾನು ತುಂಬ ಸಂಪ್ರದಾಯಸ್ಥ ಬ್ರಾಹ್ಮಣ, ಅವರು ತುಂಬ ಸಂಪ್ರದಾಯಸ್ಥ ಕಥೋಲಿಕ. ಜೆಸೂಯಿಟ್ ಬ್ರದರ್ ಆಗಿದ್ದವರು. ನನ್ನ ವಾಸ್ತವ್ಯ ಮಂಗಳಾದೇವಿ ದೇವಸ್ಥಾನದ ಹಿಂದೆ ಇದ್ದ (ಈಗ ಪಾಯಿಂಗ್ ಗೆಸ್ಟ್ ಎನ್ನುವಂತಹ) ಮನೆಯಲ್ಲಿ, ಅವರದು ಸಂತ ಅಲಾಯ್ಶಿಯಸ್ ಚರ್ಚಿನಲ್ಲಿ. ನಾವು ಅಜಂತ, ಎಲ್ಲೋರಾ, ಮುಂಬೈಗಳಿಗೆ ಶೈಕ್ಷಣಿಕಪ್ರವಾಸ ಹೋದಾಗಲೂ ನಾವು ನಿಕಟ ಜೊತೆಗಾರರು. 1974ರಲ್ಲಿ ಬಹುಶಃ ನಾವು ಒಟ್ಟೊಟ್ಟಿಗೆ ಕೆಲಸ ಸೇರಿದೆವು. ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇರಿದರು, ನಾನು ರಾಯಚೂರು ತಾಲ್ಲೂಕಿನ ಇಡಪನೂರಿನಲ್ಲಿ ಸರಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯನಾಗಿ. ಅನಂತರ ನನ್ನುನ್ನು ಪಿ ಎಚ್ಡಿ ಮಾಡಲು ಪ್ರೇರೇಪಿಸಿದವರೂ ಅವರೇ, ಮಾರ್ಗದರ್ಶಿಸಿದವರೂ ಅವರೇ. ಶಾಸ್ತ್ರೀಯ ಪ್ರಬಂಧವೊಂದನ್ನು ಬರೆಯುವ ಕೌಶಲವನ್ನು ನಾನು ಅವರಿಂದ ಕಲಿತೆ. ನಾನು ಕನ್ಮನಡಕ್ಕೆ ಗೀತಾಂಜಲಿಯನ್ನು ಭಾಷಾಂತಿರಿಸಿದಾಗ ತುಂಬ ಒಳ್ಳೆಯ ಮಾತುಗಳಿಂದ ಪ್ರೋತ್ಸಾಹಿಸಿದವರು, ಅದಕ್ಕೆ ಮುನ್ನುಡಿಯ ತೋರಣ ಬರೆದವರು. ಮಹತ್ವಾಕಾಂಕ್ಷಿ.  ಸಜ್ಜನ. ದಾರ್ಮಿಕ ಮನೋಭಾವದ ವ್ಯಕ್ತಿ. ನಿವೃತ್ತಿಯನಂತರ ಕೊಂಕಣಿ ಪ್ರಾಜಕ್ಟೊಂದಕ್ಕಾಗಿ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಸಂಬಂಧ ಒಂದು ಸಲ ಮಂಗಳೂರಿನಿಂದ ಮೈಸೂರಿಗೆ ಹಿಂದಿರುಗುತ್ತಿದ್ದಾಗ ಆಕಸ್ಮಿಕವಾಗಿ ಇಹಲೋಕ ತ್ಯಜಿಸಿದರು. ಅಕ್ಟೋಬರ್ 8, 2009ರಂದು ನಿಧನ.

Friday, 11 December 2015

ಎಸ್ ಎಲ್ ಭೈರಪ್ಪನವರ ತಂತುವನ್ನು ನಾನೂ ಓದಿದೆ


                                  ಎಸ್ ಎಲ್ ಭೈರಪ್ಪನವರ ತಂತುವನ್ನು ನಾನೂ ಓದಿದೆ

                      ವೇದಪ್ರಕಾಶ ಎಸ್ ಎಲ್ ಭೂರಪ್ಪನವರ ತಂತುವನ್ನು ತಂದು ಕೊಟ್ಟಿದ್ದರು. ಓದಿದೆ. ಈ ತಂತುವಿಗೆ ಹಲವು ಎಳೆಗಳು, ಹಲವು ಆಯಾಮಗಳು. ಇದರಲ್ಲಿ ಬಂದಿರುವುದು  ಮುಖ್ಯವಾಗಿ ಮೂರು ವಸ್ತುಗಳು. ಶಿಕ್ಷಣ, ಭ್ರಷ್ಟಾಚಾರ ಮತ್ತು ಲೈಂಗಿಕ ಸಂಬಂಧಗಳು. ಈ ಮೂರು ಎಳೆಗಳನ್ನು ಹೆಣೆದು ಸಿದ್ಧವಾಗಿದೆ ತಂತುವಿನ ಹರಹು. ಬಿಡಿಬಿಡಿಯಾಗಿಟ್ಟುಕೊಂಡರೆ ರಾಜಕೀಯ ಸಂಗೀತಗಳೂ ಸೇರಿ ಸಿತಾರ್ ಸಿದ್ಧವಾಗುತ್ತದೆ.
                     ಒಂದು ದಶಕದ ಅವಧಿಯಲ್ಲಿ ಈ ಕ್ಷೇತ್ರಗಳಲ್ಲಾದ ಬದಲಾವಣೆಗಳು ಇಲ್ಲಿ ಸುಂದರವಾಗಿ ಚಿತ್ರಿತವಾಗಿವೆ. ಭ್ರಷ್ಟಾಚಾರದ ದಾವೆಯೊಂದರಲ್ಲಿಅಲಹಾಬಾದ್ ನ್ಯಾಯಾಲಯವು ಶ್ರೀಮತಿ ಇಂದಿರಾಗಾಂಧಿಯವರನ್ನು ತಪ್ಪಿತಸ್ಥರೆಂದು ನಿರ್ಣಯಿಸಿ ಅವರನ್ನು ಲೋಕಸಭಾಸ್ಥಾನದಿಂದ ಹೊರಹಾಕಿದ್ದು ಕಾದಂಬರಿಯಲ್ಲಿ ಬರುವುದರಿಂದ ಕಥೆಗೆ ಒಂದು ರೀತಿಯ ಅಥೆಂಟಿಸಿಟಿ ಬಂದಿದೆ. ಅಭಿವೃದ್ಧಿ-ವಿಕಾಸಗಳೆಂಬ ಓಟದಲ್ಲಿ ನಾವು ಏನನ್ನು ಕಳೆದುಕೊಂಡಿದ್ದೇವೆ ಏನನ್ನು ಗಳಿಸಿದ್ದೇವೆ ಎಂಬ ಚಿತ್ರಗಳೂ ಇಲ್ಲಿ ಮನಂಬುಗುತ್ತವೆ.
                           ವಿದ್ಯಾರ್ಥಿಗಳೇ ಮಣ್ಣಿನಿಂದ ಕಟ್ಟಿದ ಕಟ್ಟಡದಲ್ಲಿ ನಡೆಯುತ್ತಿದ್ದ ಶಾಲೆ ಹೊಸ ರೀತಿಯ ಶಿಲ್ವನ್ನ ಅಳವಡಿಸಿಕೊಂಡು, ಹೊಸ ಗಟ್ಟಿ ಸಾಮಗ್ರಿಗಳಿಂದ ವೈಭವಯುತವಾಗಿ ಮಾರ್ಪಡುತ್ತದೆ.ಆ  ಹಳ್ಳಿಯ ಮಕ್ಕಳೇ ಸೇರಿ ಕಲಿಯುತ್ತಿದ್ದ ತರಗತಿಗಳಲ್ಲಿ ಭಾರತಾದ್ಯಂತದಿಂದ ಶ್ರೀಮಂತ ಕುಟುಂಬಗಳ ಮಕ್ಕಳು ಬಂದು ಸೇರುತ್ತಾರೆ. ಬಯಸುವ ಅಧ್ಯಾಪಕರಿಗೆ ಕೈತುಂಬ ಸಂಬಳ ದರಕುತ್ತದೆ. ಪಾರಂಪರಿಕ ನೀತಿಯ ಚೌಕಟ್ಟು, ಪರಿಶ್ರಮದ ಬೆಲೆ, ಒಟ್ಟಾಗಿ ಇದ್ದುದನ್ನೇ ಹಂಚಿಕೊಂಡು ತಿನ್ನುವ ಸಮುದಾಯ ಭಾವ ಕ:ಳೆದು ಹೋಗುತ್ತವೆ. ಹೊಸ ರಾಜಕೀಯ ವ್ಯವಸ್ಥೆ, ನಾಯಕರಿಗೆ ಸೌಲಭ್ಯ ಗಳ ಸುರಿಮಳೆ ಇರುವ ಜೀವನ, ಅಂತಹವರಿಗೆ ಉದ್ದಾಮತೆಯ ಹೆಸರು ಎಲ್ಲ ಸಿಗುತ್ತವೆ. ಕಷ್ಟಪಟ್ಟು ದುಡಿದೇ ತಿನ್ಬೇಕೆಂಬ ಛಲ. ಇನ್ನೊಬ್ಬರನ್ನು ಶೋಷಿಸಬಾರದೆಂಬ ವ್ರತ, ಸಮಾಜಕ್ಕಾಗಿ ತನ್ನ ದುಡಿಮೆಯೆಲ್ಲವನ್ನಾದರೂ ನೀಡಿ ಸಹವರ್ತಿಗಳ ಬಾಳು ಹಸನಾಗುವಂತೆ ಮಾಡಬೇಕೆಂಬ ಕಳಕಳಿ ನಷ್ಟವಾಗಿದೆ. ಲೈಂಗಿಕತೆಯೂ ಇತರ ಆವಶ್ಯಕತೆಗಳಂತೆಯೇ ಇನ್ನೊಂದು ಆವಶ್ಯಕತೆ ಎಂದು ಭಾವಿಸಿ ಸ್ವಚ್ಛಂದ ಲೈಂಗಿಕ ಸಂಬಂಧಗಳ ಹೊಸ ಜೀವನ ಪ್ರಾರಂಭವಾಗುತ್ತದೆ. ಮನೋನೆಮ್ಮದಿ, ಕೌಟುಂಬಿಕ ಸಂತೋಷ ಮತ್ತು ಮುಂದಿನ ಪೀಲೀಗೆಗೆ ಕುಟುಂಬವ್ಯವಹಾರಗಳ ನೆಲೆಗಟ್ಟು ಇಲ್ಲವಾಗುತ್ತದೆ.
                                 ಮೇಲನವುಗಳನ್ನೆಲ್ಲ ಒಂದೊಂದೇ ಪಾತ್ರದಲ್ಲಿ ಗುರತಿಸಿಯೂ ಕಾಣಬಹುದು ಒಟ್ಟಾಗಿ ಕಾದಂಬರಿಯಲ್ಲಿ ವಿವಿಧ ಪಾತ್ರಗಳ  ಒಡನಾಟದಲ್ಲಿಯೂ ಗುರುತಿಸಬಹುದು. ಇದು ಕಾದಂಬರಿಯ ವೈಶಿಷ್ಟ್ಯ.

ಅಭಿನವಗುಪ್ತನ ಗೀತಾರ್ಥಸಂಗ್ರಹ



                                           ಅಭಿನವಗುಪ್ತನ ಗೀತಾರ್ಥಸಂಗ್ರಹ

                    ನಾವು ಎಮ್ ಎ ಓದುತ್ತಿದ್ದಾಗ ಅಭಿನವಗುಪ್ತನ ಹೆಸರನ್ನು ನಾವು ಭಾರತೀಯ ಕಾವ್ಯ ಮೀಮಾಂಸೆಯ ಸಂದರ್ಭದಲ್ಲಿ ಓದುತ್ತಿದ್ದೆವು. ಧ್ವನಿಪ್ರಸ್ಥಾನದ ಪ್ರಮುಖ ವಿದ್ವಾಂಸನಾಗಿ ನಮಗೆ ಈತನ ಪರಿಚಯ. ಆನಂದ  ವರ್ಧನ ಧ್ವನಿಯ ಬಗ್ಗೆ ಶಕ್ತವಾಗಿ ಪ್ರತಿಪಾದಿಸಿರಬಹುದು. "ಕಾವ್ಯಸ್ಯಾತ್ಮಾ ಧ್ವನಿಃ" ಎಂದು ಮುಕ್ತವಾಗಿ ಘೋಷಿಸಿರಬಹುದು. ಆದರೆ ಧ್ವನಿಪ್ರಸ್ಥಾನಕ್ಕೆ ಗಟ್ಟಿ ನೆಲೆ ದೊರಕಿದ್ದು ಅಭಿನವಗುಪ್ತನ ವ್ಯಾಖ್ಯಾನ ಧ್ವನ್ಯಾಲೋಕಲೋಚನದಿಂದ. ಹಾಗೆಂದು ನಮ್ಮ ಪ್ರೊಫೆಸರರು ಹೇಳಿದ್ದು ನೆನಪಾಗುತ್ತದೆ. ಅವನು ಕಾಶ್ಮೀರಿ ಎಂದೂ ಅದ್ವೈತಾನುಭವದ ವ್ಯಕ್ತಿಯೆಂದೂ ಹೇಳಿದ್ದರು.
                   ಇವನು ಭಗವದ್ಗೀತೆಗೆ ಒಂದು ವ್ಯಾಖ್ಯಾನ ಬರೆದಿರುವನೆಂಬುದು 'ಚಿಂತನ ಬಯಲು'ವಿನಲ್ಲಿ ಶ್ರೀ ಚೈತನ್ಯ ಎಂಬುವರು ಬರೆದ ಲೇಖನದಿಂದ ತಿಳಿಯಿತು. ಅಥವ ನೆನಪು ಮರುಕಳಿಸಿತೆ? ತಾವಲ್ಲ ಇಂದ್ರಿಯಗಳು ಅನುಭವಿಸುವುವು ಎಂಬ ಅನುಸಂಧಾನದಿಂದ ಆಯಾ ಕರಣಗಳ ಅಭೀಪ್ಸೆಗಳನ್ನು ಪೂರೈಸಲು ಬಿಡುವುದರಿಂದ  ಕರಣದೇವತೆಗಳು ತೃಪ್ತರಾಗುವರು. ಇದರಿಂದ ಇಂತಹ ಆಸಗಳಿಂದ ಆತ್ಮ ಮುಕ್ತನಾಗುವನು. " by abandoning nothing will happen, by enjoying everything will happen. Enjoying you will be detached". ಇದೊಂದು ವಿಭಿನ್ನವಾದ ಅರ್ಥೈಸುವ ವಿಧಾನವಾಗಿದೆ.
                       ಕೊನೆಯಲ್ಲಿ ಸಂಗ್ರಹ ರೂಪವಾಗಿ ಹದಿನೆಂಟು ಅಧ್ಯಾಯಗಳನ್ನು ಹದಿನೆಂಟು ಶ್ಲೋಕಗಳಲ್ಲಿ ಸಂಕ್ಷೇಪಗೊಳಿಸಿಕೊಟ್ಟಿರುವುದು ಗೀತಾರ್ಥವನ್ನು ಅನುದಿನ ಮನ ಮಾಡಿಕಳ್ಳಬೇಕೆನ್ನುವವರಿಗೆ ತುಂಬ ಅನುಕೂಲಕರವಾದ ಸುಧಾರಣೆ.

Friday, 27 November 2015

ಅಸಹನೆ ಹೀಗೊಂದು ಅಭಿಪ್ರಾಯ

                     


                                          ಅಸಹಿಷ್ಣತೆಯ ಬಗ್ಗೆ ಹೀಗೊಂದು ಅಭಿಪ್ರಾಯ

                                    26-11-2015ರಂದು ಶ್ರೀಮತಿ ಸೋನಿಯಾ ಗಾಂಧಿ ಇವರು ಲೋಕಸಭೆಯ ತಮ್ಮ ಭಾಷಣದಲ್ಲಿ ಸರಕಾರದ ಮೇಲೆ ಸಂವಿಧಾನವನ್ನು ಅಪಹರಿಸಿದ ಆಪಾದನೆ ಹೊರಿಸಿದ್ದಾರೆ.ಇದು ಸರಕಾರ ಸಂವಿಧಾನದಿವಸವನ್ನು ಆಚರಿಸುತ್ತಿದ್ದು ಲೋಕಸಭೆಯಲ್ಲಿ ಚರ್ಚೆಯ ಸಂದರ್ಭದಲ್ಲಿ. ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷರು ಸರದಾರ್ ಪಟೇಲರ ಪರಂಪರೆಯನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸಬಾರದೆಂದು ಮೋದಿಯವರಿಗೆ ಸಲಹೆ ನೀಡಿದ್ದರು. ಮಹಾತ್ಮ ಗಾಂಧಿಯವರ ಹೆಸರನ್ನು ಬಿಜೆಪಿಯವರು ಉಲ್ಲೇಖಿಸಿದಾಗಲೆಲ್ಲ ಕಾಂಗ್ರೆಸ್ಸಿನವರು ಗಾಂಧಿ ಕೊಲೆಗೆ ಕಾರಣರಾದವರು ಅವರ ಹೆಸರನ್ನು ಹೇಳುವುದಕ್ಕೂ ಅರ್ಹರಲ್ಲವೆಂದು ಹೇಳುವುದು ಮಾಮೂಲಿಯೇ ಆಗಿಬಿಟ್ಟಿದೆ. ಗಾಂಧಿಕೊಲೆಗೆ ರಾಸ್ವಸೇ ಆಗಲೀ ಅಂದಿನ ಜನಸಂಘವಾಗಲೀ ಕಾರಣವಲ್ಲವೆಂದು ನ್ಯಾಯಾಲಯಗಳೇ ತೀರ್ಪಿಸಿದ ಮೇಲೂ. ಇವೆಲ್ಲ ಒಂದು ಅಂಶವನ್ನು ಎತ್ತಿ ತೋರಿಸುತ್ತವೆ: ಭಾರತದಲ್ಲಿ ಒಳ್ಳೆಯದೇನುಂಟೋ ಅದಕ್ಕೆಲ್ಲ ತಾವೇ ಒಡೆಯರೆಂದು ಕೆಲವರು ಮಾಡಿಕೊಂಡು ಬಿಟ್ಟಿದ್ದಾರೆ. ಬೇರೆಯವರು ಒಳ್ಳೆಯವರಿದ್ದಾರೆ, ಒಳ್ಳೆಯ ಕೆಲಸ ಮಾಡತ್ತಿದ್ದಾರೆ ಎಂದಾದರೆ ಅದು ಅವರು ಮಾಡುತ್ತಿರುವುದಲ್ಲ ಅದನ್ನು ಮಾಡುತ್ತಿರುವವರು ತಮ್ಮ ಕಡೆಯವರೇ, ಅದಕ್ಕೆ ವಿರುದ್ಧವದುದನ್ನೇನ್ನೊ  ಮೊದಲಿನವರು  ಮಾಡುತ್ತಿದ್ದಾರೆ ಎಂದು ತೋರಿಸಲು ಕಷ್ಟಪಡುವುದು ಇವರಿಗೆ ಹೀಗೆ ಸಹಜ. ಅದರ ಪರಿಣಾಮವೇ ಅಸಹಿಷ್ಣುತೆಯ ದೊಡ್ಡ ಪ್ರಚಾರ ಎನಿಸುತ್ತದೆ.
                                ನಾವು ಅಸಹನೆ ತೋರಲೇ ಬೇಕಾದ ಹಲವು ಐಟಮ್ಮುಗಳಿವೆ. ಬೃಹದಾಕಾರದಲ್ಲಿ ಬೆಳೆದು ನಿಂತಿರುವ ಭ್ರಷ್ಟಾಚಾರ, ಸೌಲಭ್ಯಗಳು ಸಾಮಾನ್ಯನಿಗೆ ಎಟುಕದಿರುವ ವಾತಾವರಣ, ಇಷ್ಟೆಲ್ಲ ಪ್ರಚಾರದನಂತರವೂ ಹರಡದ ಸ್ವಚ್ಛತೆ, ಇತ್ಯಾದಿ. ಇವುಗಳ ವಿರುದ್ಧ ಅಸಹನಾ ಆಂದೋಲನ ಮಾಡುವುದಲ್ಲ. ರಚನಾತ್ಮಕವಾಗಿ ಇವುಗಳ ಸಾಧನೆಗೆ ತಮ್ಮ ಕೈಲಾದುದನ್ನು ಮಾಡುವುದು. ಈ ಕಡೆಗೆ ಎಲ್ಲರ ಗಮನ ಹರಿಯಲೆಂದು ಹಾರೈಸುವೆ.

Wednesday, 25 November 2015

ಅಸಹಿಷ್ಣುತೆ ಮತ್ತು ಭ್ರಷ್ಟಾಚಾರ


                                        ಅಸಹಿಷ್ಣುತೆ ಮತ್ತು ಭ್ರಷ್ಟಾಚಾರ

                      ಈ ದಿನದ (25-11-2015) ಪತ್ರಿಕೆ - ವಿಜಯವಾಣಿ - ಎರಡು ವಿಷಯಗಳಿಂದ ತುಂಬಿದೆ. ಮೊದಲನೆಯದಾಗಿ 'ಅಸಹಿಷ್ಣುತೆ', ಮತ್ತು ಎರಡನೆಯದು ಲೋಕಾಯುಕ್ತ ಭ್ರಷ್ಟಾಚಾರ ಮತ್ತು ಲೋಕಾಯುಕ್ತ ಪದಚ್ಯುತಿ ಬಗ್ಗೆ ನಡೆಯುತ್ತಿರುವ ರಾಜಕೀಯ.
                      ಈಚೆಗೆ  ಅಮೀರ್ ಖಾನ್ ಅಸಹಿಷ್ಣುತೆ ಚರ್ಚೆಗಿಳಿದು ಅನವಶ್ಯಕ ಗೊಂದಲವನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸುತ್ತಿದ್ದಾರೆಯೇ ಎನಿಸುತ್ತಿದೆ. ಯಾಕೆ ಹೀಗಾಗುತ್ತಿದೆ ಎಂಬುದು ನನ್ನಂತಹ ಸಾಮಾನ್ಯರಿಗೆ ಅರ್ಥವೇ ಆಗುವುದಿಲ್ಲ.ಪ್ರೇಮಶೇಖರ ಮತ್ತು ಸಜನ್ ಪೂವಯ್ಯ ಇವರ ಎರಡು ಲೇಖನಗಳು ಈ ವಿವಾದದ ಹೊಸ ಆಯಾಮಗಳನ್ನು ಪರಿಚಯಿಸುತ್ತವೆ. ಹಿಂದಿನ ಅವಧಿಗಳಲ್ಲಿಏನಕೇನಪ್ರಕಾರೇಣ ಸಂಪತ್ತನ್ನು ಗಳಿಸುವಲ್ಲಿ ಮತ್ತು ಪ್ರಸಿದ್ಧಿ ಗಳಿಸುವಲ್ಲಿ  ಸರಕಾರಗಳ ನೆರವು ಪಡೆಯುತ್ತಿದ್ದು ಈಗ ಅದರಿಂದ ವಂಚಿತರಾಗುತ್ತಿರುವವರು ಇಂತಹ ಹುನ್ನಾರದಲ್ಲಿ ತೊಡಗಿದ್ದಾರೆಂದು ಮೊದಲನೆಯ ಲೇಖನದಲ್ಲಿ ಪ್ರತಿಪಾದಿಸಿದ್ದರೆ, ಎರಡನೆಯದರಲ್ಲಿ ಅಮೆರಿಕದಲ್ಲೋ ಫ್ರಾನ್ಸ್ ದೇಶದಲ್ಲೋ ನಡೆದ ಭಯೋತ್ಪಾದನೆ ಮುಂಬೈ ಭಯೋತ್ಪಾದಕ ಧಾಳಿಗಿಂತ ಪ್ರಮುಖ ಸ್ಥಾನ ಪಡೆಯುವುದನ್ನೂ ಇದರಿಂದ ಭಾರತೀಯರಲ್ಲಿ ಉಂಟಾಗುತ್ತಿರುವ ಅಸಮಾಧಾನವನ್ನೂ ಸ್ಪಷ್ಟವಾಗಿ ಗುರುತಿಸಲಾಗಿದೆ. ವೈಯಕ್ತಿಕ ಲಾಭಾಲಾಭಗಳಿಂದ ಮೇಲೆದ್ದು ರಾಷ್ಟ್ರದ ಒಟ್ಟುಹಿತವನ್ನು ಚಿಂತಿಸುವ ಪ್ರವೃತ್ತಿ ಬೆಳೆಸಿಕೊಳ್ಳುವುದು ಅಂತರರಾಷ್ಟ್ರೀಯವಾಗಿ ಕೂಡ ನ್ಯಾಯಪರ ನಿಲುವು ದೃಢವಾಗುವುದು ಇವುಗಳಿಂದ ಮಾತ್ರ ಅಸಹಿಷ್ಣುತೆ ಮತ್ತು ಅದರ ಉಗ್ರರೂಪವಾದ ಭಯೋತ್ಪಾದನೆ   ದೂರವಾಗಬಹುದು.
   ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ಒಂದು ವಿಚಿತ್ರ ವಿದ್ಯಮಾನವಾಗಿದೆ. ಬೇಲಿಯೇ ಎದ್ದು ಹೊಲ ಮೇಯುವ ಪ್ರವೃತ್ತಿಗೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಭ್ರಷ್ಟರಾಗಿ ಪದವಿಯಲ್ಲಿರುವವರನ್ನು ಪದಚ್ಯುತಿಗೊಳಿಸಬೇಕೆಂಬುದರಲ್ಲಿ ಎರಡು ಮಾತಿಲ್ಲ. ಆದರೆ  ಒಂದು ರಾಜಕೀಯ ಪಕ್ಷ ಒಬ್ಬರನ್ನು ಪದಚ್ಯುತಿಗೊಳಿಸಲು ಪ್ರಸ್ತಾವಿಸಿತೆಂದು ಇನ್ನೊಂದು ಪಕ್ಷ ಇನ್ನೊಬ್ಬರನ್ನು ಪದಚ್ಯುತಗೊಳಿಸಬೇಕೆಂಬ ಹಟಕ್ಕೆ ಬೀಳುವುದು ಸಂಸ್ತೆಯನ್ನು ರಾಜಕೀಕರಣಗೊಳಿಸುವುದು ಎಂತಹ ನಿರ್ಲಜ್ಜ ಕ್ರಮ!

Thursday, 19 November 2015

Ajekkala Girish Bhat in the intolerance debate



                                          Ajekkala Girish Bhat in the intolerance debate
Dr Ajekkala has now joined the intolerance debate.  The gist of his paper is that the present scenario is a result of efforts to find  peace by adjusting ourselves to an intolerant section of the society preaching secularism to appease a religious community. He traces the history in brief from constituent assembly days and has some valid points.
The author rightly observes Intolerance is not a new phenomenon in our country. It was there for several years in the past and in the award wapsidars  it is now growing.   He concentrates on the Hindu – muslim rift in the country and remarks  “actually the secular discourse during the last sixty years has not succeeded in reducing the tension between Hindus and Muslims, instead it has increased intolerance”.  He also rightly argues that the ‘demand for a common civil code’ is often seen as ‘ an attack on pluralism’. All this has resulted in the loss of mutual trust. Intolerance is a sequel of all this.

The author’s contention is that award wapsi cannot nullify intolerance and infuse tolerance into our society. He is right in doing so as the secular – communal conflicts or the Muslim – Hindu arguments are divisive by nature and lead to polarisation. This may even lead to sustained enmity in its extreme dimension. I would suggest  instead, conscious efforts to smooth out such divisive tendencies would bring forth desirable results. This means we have to raise above such groups and include ourselves in a whole. Our Prime Minister’s assertion that tradition teaches us to accept every other person and idea may guide us.