Friday, 11 December 2015

ಅಭಿನವಗುಪ್ತನ ಗೀತಾರ್ಥಸಂಗ್ರಹ



                                           ಅಭಿನವಗುಪ್ತನ ಗೀತಾರ್ಥಸಂಗ್ರಹ

                    ನಾವು ಎಮ್ ಎ ಓದುತ್ತಿದ್ದಾಗ ಅಭಿನವಗುಪ್ತನ ಹೆಸರನ್ನು ನಾವು ಭಾರತೀಯ ಕಾವ್ಯ ಮೀಮಾಂಸೆಯ ಸಂದರ್ಭದಲ್ಲಿ ಓದುತ್ತಿದ್ದೆವು. ಧ್ವನಿಪ್ರಸ್ಥಾನದ ಪ್ರಮುಖ ವಿದ್ವಾಂಸನಾಗಿ ನಮಗೆ ಈತನ ಪರಿಚಯ. ಆನಂದ  ವರ್ಧನ ಧ್ವನಿಯ ಬಗ್ಗೆ ಶಕ್ತವಾಗಿ ಪ್ರತಿಪಾದಿಸಿರಬಹುದು. "ಕಾವ್ಯಸ್ಯಾತ್ಮಾ ಧ್ವನಿಃ" ಎಂದು ಮುಕ್ತವಾಗಿ ಘೋಷಿಸಿರಬಹುದು. ಆದರೆ ಧ್ವನಿಪ್ರಸ್ಥಾನಕ್ಕೆ ಗಟ್ಟಿ ನೆಲೆ ದೊರಕಿದ್ದು ಅಭಿನವಗುಪ್ತನ ವ್ಯಾಖ್ಯಾನ ಧ್ವನ್ಯಾಲೋಕಲೋಚನದಿಂದ. ಹಾಗೆಂದು ನಮ್ಮ ಪ್ರೊಫೆಸರರು ಹೇಳಿದ್ದು ನೆನಪಾಗುತ್ತದೆ. ಅವನು ಕಾಶ್ಮೀರಿ ಎಂದೂ ಅದ್ವೈತಾನುಭವದ ವ್ಯಕ್ತಿಯೆಂದೂ ಹೇಳಿದ್ದರು.
                   ಇವನು ಭಗವದ್ಗೀತೆಗೆ ಒಂದು ವ್ಯಾಖ್ಯಾನ ಬರೆದಿರುವನೆಂಬುದು 'ಚಿಂತನ ಬಯಲು'ವಿನಲ್ಲಿ ಶ್ರೀ ಚೈತನ್ಯ ಎಂಬುವರು ಬರೆದ ಲೇಖನದಿಂದ ತಿಳಿಯಿತು. ಅಥವ ನೆನಪು ಮರುಕಳಿಸಿತೆ? ತಾವಲ್ಲ ಇಂದ್ರಿಯಗಳು ಅನುಭವಿಸುವುವು ಎಂಬ ಅನುಸಂಧಾನದಿಂದ ಆಯಾ ಕರಣಗಳ ಅಭೀಪ್ಸೆಗಳನ್ನು ಪೂರೈಸಲು ಬಿಡುವುದರಿಂದ  ಕರಣದೇವತೆಗಳು ತೃಪ್ತರಾಗುವರು. ಇದರಿಂದ ಇಂತಹ ಆಸಗಳಿಂದ ಆತ್ಮ ಮುಕ್ತನಾಗುವನು. " by abandoning nothing will happen, by enjoying everything will happen. Enjoying you will be detached". ಇದೊಂದು ವಿಭಿನ್ನವಾದ ಅರ್ಥೈಸುವ ವಿಧಾನವಾಗಿದೆ.
                       ಕೊನೆಯಲ್ಲಿ ಸಂಗ್ರಹ ರೂಪವಾಗಿ ಹದಿನೆಂಟು ಅಧ್ಯಾಯಗಳನ್ನು ಹದಿನೆಂಟು ಶ್ಲೋಕಗಳಲ್ಲಿ ಸಂಕ್ಷೇಪಗೊಳಿಸಿಕೊಟ್ಟಿರುವುದು ಗೀತಾರ್ಥವನ್ನು ಅನುದಿನ ಮನ ಮಾಡಿಕಳ್ಳಬೇಕೆನ್ನುವವರಿಗೆ ತುಂಬ ಅನುಕೂಲಕರವಾದ ಸುಧಾರಣೆ.

No comments:

Post a Comment