Thursday, 20 January 2022

ನಮ್ಮ ರಾಮಚಂದ್ರಸ್ವಾಮಿಗಳು

ನಮ್ಮ ರಾಮಚಂದ್ರಸ್ವಾಮಿಗಳು

                                    ನಾನು ಕೊಪ್ಪದಲ್ಲಿ ಎಸ್ ಎಸ್ ಎಲ್ ಸಿ ಮುಗಿಸಿದನಂತರ (1966) ಶೃಂಗೇರಿಯ ಶ್ರೀ ಜೆಸಿಬಿಎಮ್ ಕಾಲೇಜಿನಲ್ಲಿ ಪಿಯುಸಿಗೆ ನನ್ನನ್ನು ಸೇರಿಸಿದರು. ಆಗ ಕೆ ಬಿ ರಾಮಕೃಷ್ಣರಾವ್ ಎಂಬ ವಿದ್ವಾಂಸರು ಅಲ್ಲಿ ಪ್ರಿನ್ಸಿಪಾಲರಾಗಿದ್ದರು. ದೇಜಗೌ ಅವರು ಒಂದು ಸಭೆಯಲ್ಲಿ ನಮ್ಮ ಪ್ರಿನ್ಸಿಪಾಲರ ವಿದ್ವತ್ತನ್ನು ಹೊಗಳಿ ದೀಪದ ಕೆಳಗೆ ಕತ್ತಲೆ ಇದ್ದು ಅವರ ಪಾಂಡಿತ್ಯವನ್ನು ಕಾಲೇಜಿನ ವಿದ್ಯಾರ್ಥಿಗಳು ಮತ್ತು ಶೃಂಗೇರಿ ನೋಡಿರುವುದಕ್ಕಿಂತ ಹೆಚ್ಚು ರಾಜ್ಯದ ಇತರೆಡೆಗಳಲ್ಲಿ ಗುರುತಿಸಲಾಗಿದೆಯೆಂದು ಸೂಚಿಸಿದ್ದರು. ಅನಂತರ ಕೆಬಿಆರ್ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಹಿಂದೂ ದರ್ಶನಶಾಸ್ತ್ರದ ಪ್ರೊಫೆಸರರಾಗಿದ್ದರು. ಪ್ರಧಾನ ಗುರುದತ್ತ ಇವರು ಆಗ ನಮಗೆ ಕನ್ನಡದ ಪ್ರಾಧ್ಯಾಪಕರಾಗಿದ್ದರು.ಒಳ್ಳೆಯ ಸ್ಫೂರ್ತಿದಾಯಕ ಪಾಠವನ್ನು ಅವರಿಂದ ಕೇಳಬೇಕು . ನಮಗೆ ಇವರೆಲ್ಲ ಸ್ಫೂರ್ತಿ ತುಂಬಿದವರು.
                                    ನಮಗೆ ರಾಮಚಂದ್ರ ಸ್ವಾಮಿಗಳು ಕೆಮಿಸ್ಟ್ರಿ ಪ್ರಾಧ್ಯಾಪಕರು ಇವರು ನಮ್ಮ ವ್ಯಕ್ತಿತ್ವವನ್ನೇ ಕಟ್ಟಿ ನಮ್ಮನ್ನು ಬೆಳೆಸಿದವರು. ಮನೆಗೆ ಹೋದಾಗಲೆಲ್ಲ ತಿಂಡಿ ತೀರ್ಥಗಳೂ ಇರುತ್ತಿದ್ದವು. ಒಮ್ಮೊಮ್ಮೆ ಉಠವೂ ಇರುತ್ತಿತ್ತು. ಆದರೆ ಇದನ್ನೆಲ್ಲ ಮೀರಿದ್ದು ಅವರ ಪ್ರೀತಿ ಮತ್ತು ಬೌದ್ಧಿಕ ಆಹಾರ. ನನಗೆ ಗೀತೋಪನಿಷತ್ತುಗಳ ಬಗ್ಗೆ ಅಭಿಮಾನ ಮೂಡಿಸಿದ್ದು ರಾಮಚಂದ್ರಸ್ವಾಮಿಗಳು. ರಾಮಕೃಷ್ಣಾಶ್ರಮದ ಬಗ್ಗೆ ವಿವೇಕಾನಂದರ ಬಗ್ಗೆ ತಿಳಿವಳಿಕೆ ಮೂಡಿಸಿದ್ದು,ಪ್ರೀತಿ ಬೆಳೆಸಿದ್ದು ಇವರೇ. ಕಲಾತ್ಮಕವಾಗಿ ಅಕ್ಷರಗಳನ್ನು ಬರೆಯಲು ಕಲಿಸಿದವರು ಇವರು. ರಸಾಯನ ಶಾಸ್ತ್ರ ಪ್ರಯೋಗಗಳನ್ನು ಮಾಡುವಾಗ ವಹಿಸ ಬೇಕಾದ ಎಚ್ಚರ ಚಚ್ಚರಗಳನ್ನು ಮೂಡಿಸಿದವರು ಇವರು. ಸಾಹಿತ್ಯಾಭಿಮಾನವನ್ನು ಬೆಳೆಸಿದವರೂ ಇವರೇ. ಎಮ್‌ ಎ ಅಧ್ಯಯನ ಮಾಡುತ್ತಿದ್ದಾಗ ನಮ್ಮ ಪ್ರೊಫೆಸರರ ಬಗ್ಗೆ ವಿಶೇಷ ಗೌರವದ ಮಾತುಗಳನ್ನಾಡಿ ಅವರ ಮಾರ್ಗದರ್ಶನವನ್ನು ಘನತರವಾಗಿ ಪಡೆದು ಅನುಸರಿಸಿದಂತೆ ಮಾಡಿವರೂ ಇವರೇ. 
                            ಕಾಲೇಜಿನಲ್ಲಿ ಕೆಮಿಸ್ಟರಿ ಕಲಿಸಿ ಮನೆಗೆ ಹೋಗಿ ಆರಾಮ ಮಾಡುತ್ತಿದ್ದವರಲ್ಲ ಅವರು. ಮಲೆನಾಡಿನ ಮಣ್ಣಿನ ವಿಶೇಷತೆಗಳನ್ನು ಅಧ್ಯಯನ ಮಾಡಿ ಪ್ರಕಟಿಸಿದವರೂ ಹೌದು.
                            ಎಲ್ಲ ರೀತಿಯಿಂದಲೂ ನಮಗೆ ಆದರ್ಶಪ್ರಾಯರಾದವರು, ಕೆಮಿಸ್ಟ್ರಿ ಅಧ್ಯಯನ ಮುಂದುವರೆಸಲು ನಿಗದಿತ ಅರ್ಹತೆ ಹೊಂದಲಾಗದಾ ನಾನು ಸಾಹಿತ್ಯ ಅಧ್ಯಯನ ಮಾಡುವಂತೆ ಪ್ರೋತ್ಸಾಹಿಸಿದವರು ಅವರು. ನನಗೆ ಅವರೆಂದಿಗೂ ಮರೆಯಲಾಗದ ಮಾಶ್ಟ್ರು.

No comments:

Post a Comment