Thursday, 20 January 2022

ನಮ್ಮೆಲ್ಲರ ಪ್ರೀತಿಪಾತ್ರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಗ್ಗ ಗೆಳೆಯ ಓಂಕಾರನ ಬರಹ

 

ಓಂಕಾರ ಹೇಳುತ್ತಾರೆ

"ಧಾರ್ಮಿಕವಾಗಿ ಮೋದಿ ಬಗ್ಗೆ ಹೇಳುವುದಾದರೆ, ಅವನೊಬ್ಬ ದೇಶಭಕ್ತ. ದೇಶವನ್ನು ಕಾಪಾಡಲು ಬಂದ ಸತ್ಪುರುಷ. ಮೋದಿಯಂತೆ ಇರುವವರು ಮೋದಿಯೊಬ್ಬನೆ. ಅವನಂತೆ ಬೇರೆ ಯಾರೂ ಇರಲಾರರು. ಅವನಲ್ಲಿ ಶಾಸ್ತ್ರದಲ್ಲಿ ಹೇಳಿದ ಬಹುತೇಕ ಸಾತ್ವಿಕ ಗುಣಗಳು ಇವೆ. ಇಂಥವರು ಇರಲು ಹೇಗೆ ಸಾಧ್ಯ ? ಸ್ವಲ್ಪು ವಿವೇಚನೆ ಮಾಡಬೇಕು. ಇಂಥ ಶ್ರೇಷ್ಠತೆ ಮೋದಿಯಲ್ಲಿ ಬರಲು ಏನು ಕಾರಣವಿರಬಹುದು ?

ಕಲಿಯುಗದಲ್ಲಿ ಭಗವಂತನ ಅವತಾರವಿಲ್ಲ. ಆದರೆ ದೇಶಕ್ಕೆ ಆಪತ್ತು ಬಂದಾಗ ಭಗವಂತನು ಯಾವ ದೇವತೆಗಳನ್ನಾದರೂ ಕಳಿಸಬಹುದು. ನಮ್ಮ ಸಿಧ್ಧಾಂತ ಉಳಿಯಲು ವಾಯುದೇವರ ರೂಪದಲ್ಲಿ ಶ್ರೀಮದಾಚಾರ್ಯರು ಅವತಾರ ಮಾಡಲಿಲ್ಲವೇ ? 

ಹಾಗೆ ಮೋದಿಯಲ್ಲಿ ಯಾವದಾದರೂ ದೇವತೆಗಳ ಆವೇಶ ಬೇಕು. ಇಲ್ಲದಿದ್ದರೆ ಇಷ್ಟು ಪ್ರಸಿಧ್ಧಿ ಬರಲು ಹೇಗೆ ಸಾಧ್ಯ. ಇದರ ಹಿಂದೆ ಮುಖ್ಯವಾದದ್ದು ಅವರಲ್ಲಿರುವ ಭಗವಂತನ ವಿಭೂತಿ ರೂಪ. ಆ ದೇವತೆಯದ್ವಾರಾ ಭಗವಂತನ ಸನ್ನಿಧಾನ ಅಲ್ಲಗಳಿಯುವಂತಿಲ್ಲ. ಮೋದಿಯ ಶರೀರದಲ್ಲಿ ದೇವತೆಯ ಆವೇಶ ಹಾಗೂ ಭಗವಂತನ ವಿಶೇಷ ಸಾನಿಧ್ಯ ಇರಲೇಬೇಕು.

ವಿಭೂತಿ ಸಂಧಿಯಲ್ಲಿ ದಾಸರು ಸ್ಪಷ್ಟವಾಗಿ ಹೇಳಿದ್ದಾರೆ. ಅರ್ಜುನನಿಗೆ ಸಾಕ್ಷಾತ್ ಶ್ರೀಕೃಷ್ಣನೇ ಉಪದೇಶಕನಾಗಿ  ದೇಶವನ್ನು ಗೆಲ್ಲಲು ಸಾಧ್ಯವಾಗಲಿಲ್ಲವೆ ? 

ಭಗವಂತನ ಸನ್ನಿಧಾನದಿಂದಲೇ ಮೋದಿಗೆ ಇಂಥ ಶ್ರೇಷ್ಠತೆ ಬಂದಿರಲೇಬೇಕು. ಇದು ನಮ್ಮ ಸೌಭಾಗ್ಯ. ರಾಜರಲ್ಲಿ ಭಗವಂತನು ಇಂಥ ಶಕ್ತಿ ಕೊಟ್ಟಿರುತ್ತಾನೆ. ನಮ್ಮ ದೇಶವನ್ನು ಆಳುವ ರಾಜನು ಅವನೇ ಆಗಿದ್ದಾನೆ.  ನಾವೆಲ್ಲರೂ ರಾಜನಿಗೆ ವಿಶೇಷ ಶಕ್ತಿ ಕೊಟ್ಟು ದೇಶವನ್ನು  ಕಾಪಾಡಲಿ ಎಂದು ದೇವರಲ್ಲಿ ಕಿಂಚಿತ್ ಪ್ರಾರ್ಥಿಸೋಣ".


No comments:

Post a Comment