Tuesday, 15 March 2016

ಹೊಟ್ಟುಕುಟ್ಟುವ ಆಟ

                                        
                                             ಹೊಟ್ಟುಕುಟ್ಟುವ  ಆಟ


ದೇಶದಲ್ಲಿ ಅಸಹಿಷ್ಣುತೆ ಹೆಚ್ಚಿದೆ ಎಂಬ ಗುಲ್ಲು ಏರಿ ಅನೇಕರು ಅಸಹಿಷ್ಣುತೆ ಇದೆ, ಇಲ್ಲ; ಅದಕ್ಕೆ ಕಾರಣ ಅದು, ಇದು; ಇದನ್ನು ಹೋಗಲಾಡಿಸಲು ಸರಕಾರ ಕ್ರಮ ಕೈಗೊಳ್ಳಬೇಕು; ಕೈಗೊಳ್ಳುತ್ತಿಲ್ಲ, ಅದಕ್ಕಾಗಿ ಹೋರಾಟ ಮಾಡಬೇಕು ಎಂದೆಲ್ಲ ಚರ್ಚೆಗಳು ನಡೆಯುತ್ತಿವೆ. ಇಂತಹ ಚರ್ಚೆಗಳಲ್ಲಿ ಭಾಗೀದಾರರೊಬ್ಬರು ತರುಣ ಮಿತ್ರ ಗಿರೀಶಭಟ್ಟರು. ಅವರಲ್ಲಿ ನನ್ನ ಅನಿಸಿಕೆಗಳ ಅರಿಕೆ ಇಲ್ಲಿದೆ:

            ನನಗಂತೂ ಈ ಅಸಹಿಷ್ಣುತೆ ಚರ್ಚೆಗಳೆಲ್ಲ ಹೊಟ್ಟು ಕುಟ್ಟುವ ಅನುಭವ ಕೊಡುತ್ತವೆ. ನನಗೆ ಕಟ್ಟಾ ಸಂಪ್ರದಾಯಸ್ಥರಾದ ಮಸ್ಲಿಮರೂ ಕ್ರೈಸ್ತರೂ ಸ್ನೇಹಿತರಿದ್ದಾರೆ. ಅವರು ಐದು ಸಲ ನಮಾಜು ಮಾಡುವ ಮುಸ್ಲಿಮರು ಮತ್ತು ಪಾದ್ರಿತನದಲ್ಲಿರುವ ಕ್ರೈಸ್ತರು. ನಾನೂ ಕಟ್ಟಾ ಸಂಪ್ರದಾಯಸ್ಥ ಬ್ರಾಹ್ಮಣನೇ. ‘ವಾದಿ’ ಎನ್ನಲ್ಲ. ಏಕೆಂದರೆ ‘ಅದು ಅಲ್ಲಿಯೇ; ಇದು ಇಲ್ಲಿಯೇ’ ಎಂಬುದನ್ನು ನಾನು ಮನಸಾರೆ ಒಪ್ಪುವೆ.
            ಮಾಧ್ಯಮಗಳಲ್ಲಿ ಗದ್ದಲವೆಬ್ಬಿಸಿಕೊಂಡು ಈ ಬಗ್ಗೆ ಆಗುತ್ತಿರುವ ಚರ್ಚೆ, ಪ್ರಚಾರ, ವಾದಗಳೆಲ್ಲ ಶುದ್ಧ ರಾಜಕೀಯವೆಂದೇ ನನಗನ್ನಿಸುತ್ತದೆ. ಕನ್ನಯ್ಯ, ವೇಮುಲ – ಇವರಿಗೆಲ್ಲ ರಾಹುಲ್ ಗಾಂಧಿಯವರು ಆಯಾ ಸ್ಥಳಕ್ಕೇ ಹೋಗಿ ಸಾಂತ್ವನ ಹೇಳಿ ಬೆಂಬಲ ಸೂಚಿಸಿದರಷ್ಟೆ.ಈಗ ಕನ್ನಯ್ಯ ಕುಮಾರ ಹೇಳಿಕೆ ಕೊಡುತ್ತಾ ಹೋದಂತೆ ರಾಹುಲ್ ಗಾಂಧಿ ಬೆಂಬಲ ಕಾಣೆಯಾಗುತ್ತಿದೆಯಲ್ಲ? ಕನ್ನಯ್ಯ ಮಾಡಿದ್ದೂ ತಾನು ನಾಯಕನಾಗಬೇಕೆಂಬ ಹಪಿಹಪಿಯಿಂದ. ಅವನು ರಾಜಕೀಯ ನಾಯಕನ ಸ್ಥಾನಮಾನ ಗಳಿಸುತ್ತಿದ್ದಾನೆಂದು ಕಾಣುವ ಮೊದಲು ರಾಹುಲ್ ಬೆಂಬಲ. ಅಂತಹ ಸಾಧ್ಯತೆ ನಿಚ್ಚಳವಾಗುತ್ತಿದ್ದಂತೆ ನೋ ಬೆಂಬಲ. ಇಲ್ಲೆಲ್ಲ ರಾಜಕೀಯ ಸ್ವಾರ್ಥ ವಿಚಾರ ಧಾರೆಯ ಮುಖವಾಡ ಧರಿಸುತ್ತದೆ. ಆದ್ದರಿಂದಲೇ ಚುನಾವಣೆ ಬಂದಾಗ ಅಭಿವೃದ್ಧಿಯ ಐಡಿಯಾಗಳು, ಅಭಿವೃದ್ಧಿ ಸಾಧಿಸುವರೆಂಬ ವಿಶ್ವಾಸ ಮುಖ್ಯವಾಗುತ್ತವೆ. ಕೊನೆಯ ಪಕ್ಷ ಕಳೆದ ಚುನಾವಣೆಯಲ್ಲಿ ಹಾಗಾಗಿದೆ.

             ಮಾರ್ಕ್ಸ್-ವಾದವೆಂಬ ಮರೀಚಿಕೆಯ ಬೆನ್ನು ಹತ್ತಿದ ರಾಷ್ಟ್ರಗಳು ಉದುರಿರುವುದು ಇತಿಹಾಸ. ಚೀಣಾದ  ಮಾವೋವಾದ ಕೂಡ ಮಾರ್ಕ್ಸ್-ವಾದದ ಒಂದು ರೂಪವಾಗಿದ್ದು ಪುನರುತ್ಥಾನ ಅನುಭವಿಸಿ ಮೊದಲಿನ ತೀವ್ರತೆಯಿಂದ ದೂರವಾಗಿದೆಯೆಂದೆನಿಸುತ್ತದೆ. ತಾವೇನೋ ಶ್ರಮಿಕರ ಹಿತ ಕಾಯುವ ವಿಶ್ವವಾದಿಗಳೆಂದುಕೊಳ್ಳುವ ಈ ವಾದದ ಮೂರು ಅವತರಣಿಕೆಗಳು ನಮ್ಮ ದೇಶದಲ್ಲಿವೆ. ಮೂರು ಅವತರಣಿಕೆಗಳು ನಾಯಕಕೇಂದ್ರಿತವಾಗಿ ಹಟ್ಟಿಕೊಂಡವು ತಾನೆ. ಇದಕ್ಕೆ ವಿರೋಧವಾಗಿ ಎಲ್ಲರ ಹಿತದ ಮೂಲಕ ರಾಷ್ಟ್ರಹಿತಕ್ಕೆ ಬದ್ಧವಾಗಿರುವುದು ಬಿಜೆಪಿ. ಕೆಲವೊಮ್ಮೆ ಇದೆ ನಾಯಕರು ತಾವು ಇಂದೂ ವಾದಿಗಳೆಂದು ಘೋಷಿಸಿಕೊಂಡರೂ ಹಿಂದೂ ಎಂಬುದರ ವ್ಯಾಖ್ಯೆಗೆ ತೊಡಗಿದಾಗ ಇವರುಗಳು ನೀಡುವ ವಿವರಣೆ ಈ ದೇಶದಲ್ಲಿರುವ ೆಲ್ಲರೂ ಎಂಬುದೇ. ಈ ಎರಡು ಪಕ್ಷಗಳ ನಡುವೆ ಅಸಹಿಷ್ಣುತೆ ಸಹಜವೇ. ಏಕೆಂದರೆ ಅದು ಒಂದು ವರ್ಗVsಎಲ್ಲರು. ಭಾರತದಲ್ಲಿರುವ ಇನ್ನೊಂದಷ್ಟು ಪಕ್ಷಗಳು ವಂಶಾಧಾರಿತ. ನಿಜವಾಗಿ ಇಲ್ಲದ ಅಸಹಿಷ್ಣುತೆ ಹುಟ್ಟುಹಾಕುವವರು ಇವರೇ. ಇವರ ವಂಶಕುಡಿಗಳು ಅಧಿಕಾರ ಹಿಡಿಯುವುದಷ್ಟೆ ಇವರಿಗೆ ಬೇಕಾದ್ದು. ಆದ್ದರಿಂದಲೇ ಅಸಹಿಷ್ಣುತೆ ಒಂದು ರಾಜಕೀಯ ಪ್ರಚಾರ – ಈಗ ಅಧಿಕಾರದಲ್ಲಿರುವರ ಬಗ್ಗೆ ಜನರಲ್ಲಿ ಅಸಹನೆ ಉಂಟಾಗುವಂತೆ ಮಾಡಲು. ಇದಕ್ಕಿಂತ ಹೆಚ್ಚು ಪ್ರಾಶಸ್ತ್ಯವನ್ನು ಇದಕ್ಕೆ ನೀಡುವ ಅಗತ್ಯವಿಲ್ಲವೆಂದು ನನ್ನ ಭಾವನೆ.

1 comment:

  1. mao athava marxcist vadagalu krantikarivadagalu endu kelidde... Mao-tse tung Mao vadavannu hutti hakkiddallave? avana vadavu expansion maduvudu gariyagirisikondiorabahudu adare deshavu abhivriddi kanutiideyalla?

    adare asahishnute bagge nimma vadada saraniyannu opputtene....

    ReplyDelete