Friday, 27 November 2015

ಅಸಹನೆ ಹೀಗೊಂದು ಅಭಿಪ್ರಾಯ

                     


                                          ಅಸಹಿಷ್ಣತೆಯ ಬಗ್ಗೆ ಹೀಗೊಂದು ಅಭಿಪ್ರಾಯ

                                    26-11-2015ರಂದು ಶ್ರೀಮತಿ ಸೋನಿಯಾ ಗಾಂಧಿ ಇವರು ಲೋಕಸಭೆಯ ತಮ್ಮ ಭಾಷಣದಲ್ಲಿ ಸರಕಾರದ ಮೇಲೆ ಸಂವಿಧಾನವನ್ನು ಅಪಹರಿಸಿದ ಆಪಾದನೆ ಹೊರಿಸಿದ್ದಾರೆ.ಇದು ಸರಕಾರ ಸಂವಿಧಾನದಿವಸವನ್ನು ಆಚರಿಸುತ್ತಿದ್ದು ಲೋಕಸಭೆಯಲ್ಲಿ ಚರ್ಚೆಯ ಸಂದರ್ಭದಲ್ಲಿ. ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷರು ಸರದಾರ್ ಪಟೇಲರ ಪರಂಪರೆಯನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸಬಾರದೆಂದು ಮೋದಿಯವರಿಗೆ ಸಲಹೆ ನೀಡಿದ್ದರು. ಮಹಾತ್ಮ ಗಾಂಧಿಯವರ ಹೆಸರನ್ನು ಬಿಜೆಪಿಯವರು ಉಲ್ಲೇಖಿಸಿದಾಗಲೆಲ್ಲ ಕಾಂಗ್ರೆಸ್ಸಿನವರು ಗಾಂಧಿ ಕೊಲೆಗೆ ಕಾರಣರಾದವರು ಅವರ ಹೆಸರನ್ನು ಹೇಳುವುದಕ್ಕೂ ಅರ್ಹರಲ್ಲವೆಂದು ಹೇಳುವುದು ಮಾಮೂಲಿಯೇ ಆಗಿಬಿಟ್ಟಿದೆ. ಗಾಂಧಿಕೊಲೆಗೆ ರಾಸ್ವಸೇ ಆಗಲೀ ಅಂದಿನ ಜನಸಂಘವಾಗಲೀ ಕಾರಣವಲ್ಲವೆಂದು ನ್ಯಾಯಾಲಯಗಳೇ ತೀರ್ಪಿಸಿದ ಮೇಲೂ. ಇವೆಲ್ಲ ಒಂದು ಅಂಶವನ್ನು ಎತ್ತಿ ತೋರಿಸುತ್ತವೆ: ಭಾರತದಲ್ಲಿ ಒಳ್ಳೆಯದೇನುಂಟೋ ಅದಕ್ಕೆಲ್ಲ ತಾವೇ ಒಡೆಯರೆಂದು ಕೆಲವರು ಮಾಡಿಕೊಂಡು ಬಿಟ್ಟಿದ್ದಾರೆ. ಬೇರೆಯವರು ಒಳ್ಳೆಯವರಿದ್ದಾರೆ, ಒಳ್ಳೆಯ ಕೆಲಸ ಮಾಡತ್ತಿದ್ದಾರೆ ಎಂದಾದರೆ ಅದು ಅವರು ಮಾಡುತ್ತಿರುವುದಲ್ಲ ಅದನ್ನು ಮಾಡುತ್ತಿರುವವರು ತಮ್ಮ ಕಡೆಯವರೇ, ಅದಕ್ಕೆ ವಿರುದ್ಧವದುದನ್ನೇನ್ನೊ  ಮೊದಲಿನವರು  ಮಾಡುತ್ತಿದ್ದಾರೆ ಎಂದು ತೋರಿಸಲು ಕಷ್ಟಪಡುವುದು ಇವರಿಗೆ ಹೀಗೆ ಸಹಜ. ಅದರ ಪರಿಣಾಮವೇ ಅಸಹಿಷ್ಣುತೆಯ ದೊಡ್ಡ ಪ್ರಚಾರ ಎನಿಸುತ್ತದೆ.
                                ನಾವು ಅಸಹನೆ ತೋರಲೇ ಬೇಕಾದ ಹಲವು ಐಟಮ್ಮುಗಳಿವೆ. ಬೃಹದಾಕಾರದಲ್ಲಿ ಬೆಳೆದು ನಿಂತಿರುವ ಭ್ರಷ್ಟಾಚಾರ, ಸೌಲಭ್ಯಗಳು ಸಾಮಾನ್ಯನಿಗೆ ಎಟುಕದಿರುವ ವಾತಾವರಣ, ಇಷ್ಟೆಲ್ಲ ಪ್ರಚಾರದನಂತರವೂ ಹರಡದ ಸ್ವಚ್ಛತೆ, ಇತ್ಯಾದಿ. ಇವುಗಳ ವಿರುದ್ಧ ಅಸಹನಾ ಆಂದೋಲನ ಮಾಡುವುದಲ್ಲ. ರಚನಾತ್ಮಕವಾಗಿ ಇವುಗಳ ಸಾಧನೆಗೆ ತಮ್ಮ ಕೈಲಾದುದನ್ನು ಮಾಡುವುದು. ಈ ಕಡೆಗೆ ಎಲ್ಲರ ಗಮನ ಹರಿಯಲೆಂದು ಹಾರೈಸುವೆ.

Wednesday, 25 November 2015

ಅಸಹಿಷ್ಣುತೆ ಮತ್ತು ಭ್ರಷ್ಟಾಚಾರ


                                        ಅಸಹಿಷ್ಣುತೆ ಮತ್ತು ಭ್ರಷ್ಟಾಚಾರ

                      ಈ ದಿನದ (25-11-2015) ಪತ್ರಿಕೆ - ವಿಜಯವಾಣಿ - ಎರಡು ವಿಷಯಗಳಿಂದ ತುಂಬಿದೆ. ಮೊದಲನೆಯದಾಗಿ 'ಅಸಹಿಷ್ಣುತೆ', ಮತ್ತು ಎರಡನೆಯದು ಲೋಕಾಯುಕ್ತ ಭ್ರಷ್ಟಾಚಾರ ಮತ್ತು ಲೋಕಾಯುಕ್ತ ಪದಚ್ಯುತಿ ಬಗ್ಗೆ ನಡೆಯುತ್ತಿರುವ ರಾಜಕೀಯ.
                      ಈಚೆಗೆ  ಅಮೀರ್ ಖಾನ್ ಅಸಹಿಷ್ಣುತೆ ಚರ್ಚೆಗಿಳಿದು ಅನವಶ್ಯಕ ಗೊಂದಲವನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸುತ್ತಿದ್ದಾರೆಯೇ ಎನಿಸುತ್ತಿದೆ. ಯಾಕೆ ಹೀಗಾಗುತ್ತಿದೆ ಎಂಬುದು ನನ್ನಂತಹ ಸಾಮಾನ್ಯರಿಗೆ ಅರ್ಥವೇ ಆಗುವುದಿಲ್ಲ.ಪ್ರೇಮಶೇಖರ ಮತ್ತು ಸಜನ್ ಪೂವಯ್ಯ ಇವರ ಎರಡು ಲೇಖನಗಳು ಈ ವಿವಾದದ ಹೊಸ ಆಯಾಮಗಳನ್ನು ಪರಿಚಯಿಸುತ್ತವೆ. ಹಿಂದಿನ ಅವಧಿಗಳಲ್ಲಿಏನಕೇನಪ್ರಕಾರೇಣ ಸಂಪತ್ತನ್ನು ಗಳಿಸುವಲ್ಲಿ ಮತ್ತು ಪ್ರಸಿದ್ಧಿ ಗಳಿಸುವಲ್ಲಿ  ಸರಕಾರಗಳ ನೆರವು ಪಡೆಯುತ್ತಿದ್ದು ಈಗ ಅದರಿಂದ ವಂಚಿತರಾಗುತ್ತಿರುವವರು ಇಂತಹ ಹುನ್ನಾರದಲ್ಲಿ ತೊಡಗಿದ್ದಾರೆಂದು ಮೊದಲನೆಯ ಲೇಖನದಲ್ಲಿ ಪ್ರತಿಪಾದಿಸಿದ್ದರೆ, ಎರಡನೆಯದರಲ್ಲಿ ಅಮೆರಿಕದಲ್ಲೋ ಫ್ರಾನ್ಸ್ ದೇಶದಲ್ಲೋ ನಡೆದ ಭಯೋತ್ಪಾದನೆ ಮುಂಬೈ ಭಯೋತ್ಪಾದಕ ಧಾಳಿಗಿಂತ ಪ್ರಮುಖ ಸ್ಥಾನ ಪಡೆಯುವುದನ್ನೂ ಇದರಿಂದ ಭಾರತೀಯರಲ್ಲಿ ಉಂಟಾಗುತ್ತಿರುವ ಅಸಮಾಧಾನವನ್ನೂ ಸ್ಪಷ್ಟವಾಗಿ ಗುರುತಿಸಲಾಗಿದೆ. ವೈಯಕ್ತಿಕ ಲಾಭಾಲಾಭಗಳಿಂದ ಮೇಲೆದ್ದು ರಾಷ್ಟ್ರದ ಒಟ್ಟುಹಿತವನ್ನು ಚಿಂತಿಸುವ ಪ್ರವೃತ್ತಿ ಬೆಳೆಸಿಕೊಳ್ಳುವುದು ಅಂತರರಾಷ್ಟ್ರೀಯವಾಗಿ ಕೂಡ ನ್ಯಾಯಪರ ನಿಲುವು ದೃಢವಾಗುವುದು ಇವುಗಳಿಂದ ಮಾತ್ರ ಅಸಹಿಷ್ಣುತೆ ಮತ್ತು ಅದರ ಉಗ್ರರೂಪವಾದ ಭಯೋತ್ಪಾದನೆ   ದೂರವಾಗಬಹುದು.
   ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ಒಂದು ವಿಚಿತ್ರ ವಿದ್ಯಮಾನವಾಗಿದೆ. ಬೇಲಿಯೇ ಎದ್ದು ಹೊಲ ಮೇಯುವ ಪ್ರವೃತ್ತಿಗೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಭ್ರಷ್ಟರಾಗಿ ಪದವಿಯಲ್ಲಿರುವವರನ್ನು ಪದಚ್ಯುತಿಗೊಳಿಸಬೇಕೆಂಬುದರಲ್ಲಿ ಎರಡು ಮಾತಿಲ್ಲ. ಆದರೆ  ಒಂದು ರಾಜಕೀಯ ಪಕ್ಷ ಒಬ್ಬರನ್ನು ಪದಚ್ಯುತಿಗೊಳಿಸಲು ಪ್ರಸ್ತಾವಿಸಿತೆಂದು ಇನ್ನೊಂದು ಪಕ್ಷ ಇನ್ನೊಬ್ಬರನ್ನು ಪದಚ್ಯುತಗೊಳಿಸಬೇಕೆಂಬ ಹಟಕ್ಕೆ ಬೀಳುವುದು ಸಂಸ್ತೆಯನ್ನು ರಾಜಕೀಕರಣಗೊಳಿಸುವುದು ಎಂತಹ ನಿರ್ಲಜ್ಜ ಕ್ರಮ!

Thursday, 19 November 2015

Ajekkala Girish Bhat in the intolerance debate



                                          Ajekkala Girish Bhat in the intolerance debate
Dr Ajekkala has now joined the intolerance debate.  The gist of his paper is that the present scenario is a result of efforts to find  peace by adjusting ourselves to an intolerant section of the society preaching secularism to appease a religious community. He traces the history in brief from constituent assembly days and has some valid points.
The author rightly observes Intolerance is not a new phenomenon in our country. It was there for several years in the past and in the award wapsidars  it is now growing.   He concentrates on the Hindu – muslim rift in the country and remarks  “actually the secular discourse during the last sixty years has not succeeded in reducing the tension between Hindus and Muslims, instead it has increased intolerance”.  He also rightly argues that the ‘demand for a common civil code’ is often seen as ‘ an attack on pluralism’. All this has resulted in the loss of mutual trust. Intolerance is a sequel of all this.

The author’s contention is that award wapsi cannot nullify intolerance and infuse tolerance into our society. He is right in doing so as the secular – communal conflicts or the Muslim – Hindu arguments are divisive by nature and lead to polarisation. This may even lead to sustained enmity in its extreme dimension. I would suggest  instead, conscious efforts to smooth out such divisive tendencies would bring forth desirable results. This means we have to raise above such groups and include ourselves in a whole. Our Prime Minister’s assertion that tradition teaches us to accept every other person and idea may guide us.

Tuesday, 17 November 2015

ಯೋಗದಿವಸ

                                            ಅಂತರ ರಾಷ್ಟ್ರೀಯ ಯೋಗದಿವಸ
ಮಹರ್ಷಿ ಪತಂಜಲಿ ಯೋಗ ವಿಜ್ಞಾನದ ಪಿತ ಎಂಬಂತೆ ಹೆಸರು ಗಳಿಸಿದ್ದಾನೆ. ಅವನು 195 ಸೂತ್ರಗಳಲ್ಲಿ ಯೋಗ ತತ್ವಗಳನ್ನು ಸೆರೆಹಿಡಿದಿದ್ದಾನೆ. ಇವೇ ಯೋಗಶಾಸ್ತ್ರದ ನೆಲಗಟ್ಟು. ದೇಹವನ್ನು ಆರೋಗ್ಯಕರವಾಗಿಟ್ಟುಕೊಳ್ಳುವುದು, ಮಾನಸಿಕ ನಿಯಂತ್ರಣ ಸಾಧಿಸುವುದು ಮತ್ತು ತನ್ಮೂಲಕ ಆಧ್ಯಾತ್ಮಿಕ ಪ್ರಗತಿ ಸಾಧಿಸುವುದು - ಇವು ಯೋಗಾಭ್ಯಾಸದ ಗುರಿಗಳು. ಹೀಗೆ ಇದು ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸಗಳ ಒಂದು ಪರಂಪರೆಯಾಗಿದ್ದು ಇದರ ಮೂಲಸ್ಥಾನ ಭಾರತವೆಂಬುದು ಹೆಮ್ಮೆಯ ವಿಷಯ. 
                    ಯೋಗವಿಜ್ಷಾವೀಗ ಪ್ರಪಂಚದ ತುಂಬೆಲ್ಲ ಹರಡಿದ್ದು ವಿಭಿನ್ನ ರೀತಿಯ ಮಾರ್ಪಾಟುಗಳಿಗೂ ಒಳಗಾಗಿದೆ. ಜನಪ್ರಿಯವಾಗಿದೆ. ಹೀಗಾಗಿ ಅಲ್ಲಲ್ಲಿ ಯೋಗ ದಿವಸವನ್ನು ತಮ್ಮತಮ್ಮ ಅನುಕೂಲಕ್ಕೆ ತಕ್ಕಂತೆ ಆಚರಿಸುತ್ತಿದ್ದರು.
                    ಇದನ್ನೆಲ್ಲ ಗಮನಿಸಿದ ನಮ್ಮ ಪ್ರಧಾನ ಮಂತ್ರಿಗಳು 2014ರಂದು ವಿಶ್ವಸಂಸ್ಥೆಯ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದಾಗ ಜೂನ್ 21ನ್ನು ಅಂತರರಾಷ್ಟ್ರೀಯ ಯೋಗ ದಿವಸವೆಂದು ಆಚರಿಸಬೇಕೆಂಬ ಪ್ರಸ್ತಾಪವನ್ನು ಮುಂದಿಟ್ಟರು. ವಿಶ್ವಸಮುದಾಯವು ಇದನ್ನು ಕೂಡಲೇ ಒಪ್ಪಿತು.
                       ಒಪ್ಪದೇ ಏನು? ಇದೊಂದು ಪ್ರದೇಶದವರಿಗೋ, ಭಾಷೆಯ ಜನರಿಗೋ, ಧಾರ್ಮಿಕ ಸಂಪ್ರದಾಯದ ಜನರಿಗೋ ಅನ್ವಯವಾಗುವಂತಹ ಒಂದು ಆಚಾರವಲ್ಲ ತಾನೆ. ಈ ಎಲ್ಲ ವರ್ಗದವರನ್ನೂ ಮೇಲಕ್ಕೆತ್ತಬಲ್ಲ ನಿಜವಾದ ಅರ್ಥದ ಧಾರ್ಮಿಕ ಶಿಸ್ತಲ್ಲವೇ?  ವಿಶ್ವಕ್ಕ ಭಾರತದ ಕೊಡುಗೆಯೊಂದಕ್ಕೆ ಕಡೆಗೂ ಮಾನ್ಯತೆ ದೊರಕಿತು.