ವೆಂಕಟೇಶ ಚಾಗಿ ಅವರ ಈ ಕವಿತೆಯನ್ನು ಈ ದಿನ ಹೊನಲು ತಾಣದಲ್ಲಿ ನಾನೋದಿದೆ. ಒಂದು ರೀತಿಯ ಮೌನಕ್ಕೆ ಶರಣಾದೆ.
ಕವಿತೆ: ಎಲ್ಲ ತೀರಗಳ ದಾಟಿ
– ವೆಂಕಟೇಶ ಚಾಗಿ.
ಎಲ್ಲ ತೀರಗಳ ದಾಟಿ
ಹೊರಟಿರುವೆ ಎಲ್ಲಿಗೆ
ಎಲ್ಲಿಗೋ ನಿನ್ನ ಪಯಣ
ಎಲ್ಲ ಕನಸುಗಳ
ಕಾಣದೂರಿನ ಕಡೆಗೆ
ಮುಗಿಯಿತೇ ನಿನ್ನ ವಚನ
ಹೊರಟಿರುವೆ ಎಲ್ಲಿಗೆ
ಎಲ್ಲಿಗೋ ನಿನ್ನ ಪಯಣ
ಎಲ್ಲ ಕನಸುಗಳ
ಕಾಣದೂರಿನ ಕಡೆಗೆ
ಮುಗಿಯಿತೇ ನಿನ್ನ ವಚನ
ಬಿಂದುವಿಂದಲಿ ಬೆಳೆದು
ನೋವು ನಲಿವಲಿ ಬೆಂದು
ಮರೆಸಿತೇ ಎಲ್ಲ ಆ ಕಾಲ
ಕಟ್ಟಿ ಇಟ್ಟಿರುವ ಬುತ್ತಿ
ಎಶ್ಟು ದಿವಸದ ಸ್ವತ್ತು?
ತೀರಿತೇ ಕೊನೆಯ ಸಾಲ
ನೋವು ನಲಿವಲಿ ಬೆಂದು
ಮರೆಸಿತೇ ಎಲ್ಲ ಆ ಕಾಲ
ಕಟ್ಟಿ ಇಟ್ಟಿರುವ ಬುತ್ತಿ
ಎಶ್ಟು ದಿವಸದ ಸ್ವತ್ತು?
ತೀರಿತೇ ಕೊನೆಯ ಸಾಲ
ಹಂಗು ರಂಗಿನ ಬದುಕು
ಪಡೆದ ಪುಣ್ಯನು ನೀನು
ಗಳಿಸಿ ಉಳಿಸಿದುದೇನು
ಕವನ ಮುಗಿದ ಮೇಲೆ
ಅವನ ಕಾಣದ ತವಕ
ಎಲ್ಲ ಗಮನಿದೆ ಆ ಬಾನು
ಪಡೆದ ಪುಣ್ಯನು ನೀನು
ಗಳಿಸಿ ಉಳಿಸಿದುದೇನು
ಕವನ ಮುಗಿದ ಮೇಲೆ
ಅವನ ಕಾಣದ ತವಕ
ಎಲ್ಲ ಗಮನಿದೆ ಆ ಬಾನು
ಇಂದ್ರಿಯಾತಿಂದ್ರೀಯ
ನೂರು ಮಾತಿನ ದಾರಿ
ಹಗಲಿರುಳು ನಡೆಯುವುದೇ
ಬಾನು ಅತೀ ಬಾಗಿದರೂ
ದರೆಯ ಚುಂಬಿಸುವುದೆಂತು
ಬೇಡಿಕೆಗೆ ಮತ್ತೆ ಮರಳುವುದೇ
ನೂರು ಮಾತಿನ ದಾರಿ
ಹಗಲಿರುಳು ನಡೆಯುವುದೇ
ಬಾನು ಅತೀ ಬಾಗಿದರೂ
ದರೆಯ ಚುಂಬಿಸುವುದೆಂತು
ಬೇಡಿಕೆಗೆ ಮತ್ತೆ ಮರಳುವುದೇ
ನೀನಲ್ಲ ನಾನಲ್ಲ ಅವನಲ್ಲ
ಜಗದೊಡೆಯ ಜಗದಲಿಲ್ಲ
ನಾವಿರುವುದೊಡೆಯನೊಳಗೆ
ಅಂಗ ಬೇದವ ತೊರೆದು
ಸಂಗ ಬಂಗವ ಮರೆತು
ಲೀನವಾಗಲಿ ಈಗ ವಚನಗೊಳಗೆ
ಜಗದೊಡೆಯ ಜಗದಲಿಲ್ಲ
ನಾವಿರುವುದೊಡೆಯನೊಳಗೆ
ಅಂಗ ಬೇದವ ತೊರೆದು
ಸಂಗ ಬಂಗವ ಮರೆತು
ಲೀನವಾಗಲಿ ಈಗ ವಚನಗೊಳಗೆ
